ಬೆಳಿಗ್ಗೆ newspaper ಗಾಗಿ ಟಿಪಾಯಿ ಮೇಲೆ ಕೈ ಆಡಿಸೋವಾಗ ರಾಮಾಯಣ/ಮಹಾಭಾರತ ಪರೀಕ್ಷೆಯ (ತಮ್ಮ ರಾಮಾಯಣ ಪರೀಕ್ಷೆ ಕಟ್ಟಿದ್ದ) question paper ಸಿಕ್ಕಿತು. PUC ಪಾಠ ನೆನಪಿರೋ ಹಾಗೆ ಇದೂ ನೆನಪಿರುತ್ತೆ ಅಂತ ಓದಲು ಶುರು ಮಾಡಿದೆ. ಎರಡೇ ಪ್ರಶ್ನೆ.. ಆಮೇಲೆ ಉತ್ತರ ಹೊಳೆಯಲಿಲ್ಲ! ಜೋರಾಗಿ ಓದಲು ಶುರು ಮಾಡಿದೆ. ಅಪ್ಪ ಅಮ್ಮನೂ ಈ ಪ್ರಶ್ನಾವಳಿಯಲ್ಲಿ ಭಾಗವಹಿಸಲಿ ಎಂದು (actually ನನಗೆ ಮಾತ್ರ ಅಲ್ಲ ಮರೆತು ಹೋಗಿರೋದು ಅಂತ ಸಮಾಧಾನ ಮಾಡಿಕೊಳೋದಕ್ಕೆ). ಆದರೆ ಪ್ರಶ್ನೆ ಓದಿ ಮುಗಿಯುತ್ತಿದ್ದಂತೆ ಅಪ್ಪ ಉತ್ತರಿಸಲು ಶುರು ಮಾಡಿದರು! ನನಗೆ complex ಆಗಲು ಶುರು ಆಯಿತು. "ಅರೆ! ಮಹಾಭಾರತ ಪರೀಕ್ಷೆ ಲಿ 91 ಬಂದಿದ್ದು ನಂಗೆ. ಅಪ್ಪ ಎಷ್ಟ್ ಚೆನಾಗ್ ಉತ್ತರ ಹೇಳ್ತಾ ಇದಾರಲ! " ಎಂದು. ಅವರು ready ಆಗಿ office ಗೆ ಹೋಗೋ ತನಕ ಕಾದು, ಮತ್ತೆ ಮುಂದುವರೆಸಿದೆ. ಕಾರಣ ಅಮ್ಮನೂ ನನ್ನಂತೆ ಉತ್ತರಕ್ಕಾಗಿ ತಡಕಾಡುತ್ತಿದ್ದರು ;) ಯಾವುದೋ ಒಂದು ಪ್ರಶ್ನೆಯ ಉತ್ತರಕ್ಕೆ ಪಾಂಡವರ ದಾಯಾದಿಗಳ ಹೆಸರು ಬೇಕಿತ್ತು. ನನಗೆ ನೆನಪಾಗಬಾರದೆ! "ಕೌರವರೂ" ನೆನಪಾಗದೆ ಇರೋ ಅಷ್ಟು ಮರೆತು ಹೋಗಿದೆಯೇ ನನಗೆ?! ಪುನಃ ಓದುವ ಕಾಲ ಬಂದಿದೆ ಅಂತ confirm ಆಯಿತು. ಕಿಶೋರ ಭಾರತ ಹಿಡಿಯಲು ಹೊರಟೆ (ಹೌದು. ನನ್ನ levelಗೆ ಅದೇ ಸರಿ) bye! :)
ದೃಶ್ಯ ಮಾಧ್ಯಮ-ಏನಿದೆ ಒಳಗಡೆ?
7 years ago